ವಾಹನ ಸವಾರರ ಗಮನಕ್ಕೆ: ಪೀಣ್ಯ ಮೇಲ್ಸೇತುವೆ ರಾತ್ರಿ ವೇಳೆ ಬಂದ್! ಪರ್ಯಾಯ ಮಾರ್ಗದ ಪೂರ್ಣ ವಿವರ ಇಲ್ಲಿದೆ.
ವರದಿಗಾರರು (Reporter)
Hemanth Rajashekar06:31 AM IST

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ-4 (NH-4) ಮಾರ್ಗವಾಗಿ ಬೆಂಗಳೂರು ನಗರ ಪ್ರವೇಶಿಸುವ ವಾಹನ ಸವಾರರಿಗೆ ಸಂಚಾರ ಪೊಲೀಸರು ಪ್ರಮುಖ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಪೀಣ್ಯದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆಯಲ್ಲಿ (ಪೀಣ್ಯ ಫ್ಲೈಓವರ್) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಜುಲೈ 27 ರಿಂದ ಆಗಸ್ಟ್ 5 ರವರೆಗೆ ರಾತ್ರಿ ವೇಳೆ ಸಂಚಾರ ನಿರ್ಬಂಧ ವಿಧಿಸಲಾಗಿದೆ.
ಮೇಲ್ಸೇತುವೆಯ ಕೆನ್ನಮೆಟಲ್ ವಿಡಿಯಾ ಮೇಲ್ಸೇತುವೆ ರ್ಯಾಂಪ್ನಿಂದ ಎಸ್ಆರ್ಎಸ್ ಕೆಳ ಸೇತುವೆ (SRS Down Ramp) ವರೆಗಿನ ಮಾರ್ಗದಲ್ಲಿ ಈ ನಿಯಮ ಅನ್ವಯವಾಗಲಿದ್ದು, ಬೆಂಗಳೂರು ನಗರದ ಕಡೆಗೆ ಆಗಮಿಸುವ ಎಲ್ಲಾ ನಮೂನೆಯ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಸಂಚಾರ ನಿರ್ಬಂಧದ ವೇಳಾಪಟ್ಟಿ
- ವಾರದ ದಿನಗಳಲ್ಲಿ (ಸೋಮವಾರದಿಂದ ಶುಕ್ರವಾರ): ಪ್ರತಿದಿನ ರಾತ್ರಿ 10:00 ಗಂಟೆಯಿಂದ ಬೆಳಗಿನ ಜಾವ 5:00 ಗಂಟೆಯವರೆಗೆ.
- ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ): ಮಧ್ಯರಾತ್ರಿ 12:00 ಗಂಟೆಯಿಂದ ಬೆಳಗಿನ ಜಾವ 5:00 ಗಂಟೆಯವರೆಗೆ.

ಸವಾರರಿಗೆ ಪರ್ಯಾಯ ಮಾರ್ಗ
ನೆಲಮಂಗಲ ಭಾಗದಿಂದ ಬೆಂಗಳೂರು ನಗರದ ಕಡೆಗೆ ಪ್ರಯಾಣಿಸುವ ವಾಹನ ಸವಾರರು ರಾತ್ರಿ ಸಂಚಾರ ನಿರ್ಬಂಧದ ಸಮಯದಲ್ಲಿ ಕೆಳಗಿನ ಪರ್ಯಾಯ ರಸ್ತೆಯನ್ನು ಬಳಸುವಂತೆ ಸೂಚಿಸಲಾಗಿದೆ:
- ಕೆನ್ನಮೆಟಲ್ ಕಾರ್ಖಾನೆ ಬಳಿ ಮೇಲ್ಸೇತುವೆಯಿಂದ ನಿರ್ಗಮಿಸಿ (Exit).
- NH-4 ಸರ್ವಿಸ್ ರಸ್ತೆಯ ಮೂಲಕ 8ನೇ ಮೈಲಿವರೆಗೆ ಸಾಗಿ.
- 8ನೇ ಮೈಲಿಯಿಂದ ದಾಸರಹಳ್ಳಿ → ಜಾಲಹಳ್ಳಿ ಕ್ರಾಸ್ → ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ → ಎಸ್ಆರ್ಎಸ್ ಜಂಕ್ಷನ್ ಮುಖಾಂತರ ಗೊರಗುಂಟೆಪಾಳ್ಯ ತಲುಪಿ ಮುಂದುವರಿಯಬಹುದು.
ರಸ್ತೆ ನವೀಕರಣ ಕಾಮಗಾರಿಯನ್ನು ಸುಗಮವಾಗಿ ಮುಕ್ತಾಯಗೊಳಿಸಲು ಹಾಗೂ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಸಾರ್ವಜನಿಕರು ಮತ್ತು ವಾಹನ ಚಾಲಕರು ಸಂಚಾರ ಪೊಲೀಸರೊಂದಿಗೆ ಸಹಕರಿಸಬೇಕಾಗಿ ವಿನಂತಿಸಲಾಗಿದೆ.
ಇತ್ತೀಚಿನ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
ಇನ್ಫೋಸಿಸ್ಗೆ ₹2 ಕೋಟಿ ದಂಡ! ಉದ್ಯೋಗಿಗಳ ಟೈಮ್-ಟ್ರ್ಯಾಕಿಂಗ್ ಲೋಪ ಫ್ರಾನ್ಸ್ ಕಾರ್ಮಿಕ ಇಲಾಖೆಯಿಂದ ದಂಡ.